ಬ್ರಹ್ಮರಥ.


ರಥ ಎಳೆಯುತ್ತೇನೆಂದು ಹಮ್ಮಿಂದ ಹೋಗಿ ಮಿಳ್ಳೆಗೆ ಕೈ ಹಾಕಿದ್ದಷ್ಟೇ ದಿಟ. ಬಹುಷ: ಯಾರಿಗೂ ರಥವನ್ನು ಎಳೆದ ಅನುಭವ ಆಗಿರಲಿಕ್ಕಿಲ್ಲ. ರಥ ನಾವೆಲ್ಲ ಅಂದುಕೊಂಡಂತೆ ತನ್ನ ಗಮ್ಯ ಸೇರಿತು. ಉಳಿದದ್ದು ಕೈ ಹಾಕಿದ ಧನ್ಯತೆ ಮತ್ತು ಅಳಿದದ್ದು ಹಮ್ಮು ಮಾತ್ರ!

ಈ ಬದುಕೂ ಹಾಗೆ! ಒಂದು ಆಶಾಭಾವ -ಒಂದು ಉತ್ಸಾಹ-ಸಾಧ್ಯವಾದಷ್ಟು ಒಳ್ಳೆಯ ಮನಸ್ಸು ಮತ್ತು ರುಚಿಗೆ ತಕ್ಕಷ್ಟು ಹಮ್ಮಿಂದ ಬರಿದೆ ಜಗ್ಗಬೇಕಾದ ಒಂದು ಬ್ರಹ್ಮರಥವಷ್ಟೆ!

Comments

Popular posts from this blog

ಬಾಳಕುದುರು ಮಠದ ಇತಿಹಾಸ

ವರ್ಣಾಶ್ರಮಗಳು ಮತ್ತು ಧರ್ಮ

ಕಂಡುಳಿದವರು ಉಲಿದಂತೆ...